ಮನದಾಳದ ನೋವು-ನಲಿವು.
ಪರಭಾಷಾ ಬಂಧುಗಳಿಗೆ, ಏಕೋ, ಏನೋ, ಕನ್ನಡ-ಕನ್ನಡಿಗರೆಂದರೇ ಇಂದಿಗೂ ಅಪಥ್ಯ.
ಆದಾಗ್ಯೂ, ನಮ್ಮ ಅಪ್ರಭುದ್ಧ ಭಂಡ-ಬಡಾಯಿ ರಾಜಕಾರಣಿಗಳ ನೋಟ ಬರೀ ಪರಭಾಷಿಕರ ಮತಗಳಿಕೆಯತ್ತ.
ಇದ್ದದ್ದೇ, ಯಾವತ್ತೂ, ಕೆಲವರ ರಾಜಕಾರಣದ ನೋಟ ಕೊಳಚೆಯ ಸುತ್ತ-ಮುತ್ತ.
ಅವರನ್ನು, ಆದಷ್ಟು ಸರಿಯಾದ ದಾರಿಗೆಳೆದು ತರುವ ಚಿಕ್ಕ ಪ್ರಯತ್ನ ನನ್ನದು, ಪ್ರತಿನಿತ್ಯ.
ರಾಜಕಾರಣಿಗಳ ಕೆಲ ಕನ್ನಡ ವಿರೋಧಿ ಧೋರಣೆ, ಕನ್ನಡಿಗರಿಗೆ ಅಪಥ್ಯ,
ಅಂಥವರ ವಿರುದ್ಧ ಹೋರಾಟ ನನ್ನದು, ಪ್ರತಿನಿತ್ಯ,
ಉದ್ದೇಶವಿಷ್ಟೇ, ಸಕಲ ಭಾಷಾಬಂಧುಗಳಿಗೆ ಮನವರಿಕೆ ಮಾಡಿಸುವುದು, ಕನ್ನಡವೇ ಸತ್ಯ, ಕನ್ನಡವೇ ನಿತ್ಯ.
- ನಿಮ್ಮ ಸಂಕೇತ, ಪ್ರತಿನಿತ್ಯ..
No comments:
Post a Comment